Slide
Slide
Slide
previous arrow
next arrow

ಹಳಿಯಾಳದಲ್ಲಿ ಕರವೇಯಿಂದ ಪ್ರತಿಭಟನೆ

300x250 AD

ಹಳಿಯಾಳ : ಬೆಂಗಳೂರು ನಗರದ ವ್ಯಾಪ್ತಿಯಲ್ಲಿರುವ ವಾಣಿಜ್ಯ ಮಳಿಗೆಗಳು ಕಟ್ಟಡಗಳು ಹಾಗೂ ಇನ್ನಿತರೆ ವ್ಯಾಪಾರ ಸ್ಥಳಗಳಲ್ಲಿ ಶೇಕಡ 60ರಷ್ಟು ಕನ್ನಡ ಮತ್ತು ಶೇಕಡ 40ರಷ್ಟು ಆಂಗ್ಲ ಭಾಷೆಯನ್ನು ಬಳಸುವಂತೆ ಆಗ್ರಹಿಸಿ ಟಿ.ಎ ನಾರಾಯಣಗೌಡರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ಸಂದರ್ಭದಲ್ಲಿ ಕರವೇ ರಾಜ್ಯಾದ್ಯಕ್ಷರಾದ ಟಿ.ಎ.ನಾರಾಯಣ ಗೌಡರನ್ನು ಹಾಗೂ ಕಾರ್ಯಕರ್ತರನ್ನು ಬಂಧಿಸಿರುವುದನ್ನು ವಿರೋಧಿಸಿ, ಕೂಡಲೆ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಶನಿವಾರ ಕರವೇ (ನಾ) ಬಣದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಘಟಕದ ಅಧ್ಯಕ್ಷರಾದ ಬಸವರಾಜ ಬೆಂಡಿಗೇರಿಮಠ, ಗೌರವಾದ್ಯಕ್ಷರಾದ ವಿಜಯ ಪಡ್ನಿಸ್, ಕರವೇ ಪ್ರಮುಖರಾದ ಚಂದ್ರಕಾಂತ ದುರ್ವೆ, ವಿನೊದ ದೊಡ್ಡಮನಿ, ಮಹೇಶ್ ಆನೆಗುಂದಿ, ಶಿವಾನಂದ ಕಮ್ಮಾರ, ಸುರೇಶ ಕೊಕಿತಕರ, ರಾಮಾ ಜಾವಳೆಕರ,ಸುಧಾಕರ ಕುಂಬಾರ, ಪರಶುರಾಮ ಶಾಪುರಕರ,ಅರುಣ ಸೊರಗೊಂಡ ಹಾಗೂ ಕರವೇ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top